⚡ Latest News ⚡

Upcoming Events : 🔥 🔴🔥 Cooking with fire, Talents Day, Sports Day🔥

Saturday, August 29, 2026

Konkani Manyata Divas Celebrated at SMS College, Brahmavar

 

Brahmavar, 28th August 2026: The Konkani Club of St. Mary's Syrian College (SMS College), Brahmavar, celebrated Konkani Manyata Divas with a vibrant cultural programme at the Rev. Fr. P. G. Koshy Memorial Auditorium on Friday.

The programme was presided over by Mr. Prasanna Shetty, Vice Principal of the college. In his presidential address, he appreciated the endeavours of the Konkani Club as an effective platform for students to exhibit their talents and emphasized the need for greater coordination among different Konkani dialects for the overall enrichment of the language and culture.

The programme commenced with a prayer led by Ms. Keerthana. Mr. Alfred Furtado, Convener of the Konkani Club, spoke on the relevance of the day and highlighted the importance of unity among Konkani speaking communities.

The formal function included unfurling of the Konkani flag and singing of the Konkani Anthem.Ms. Kavana Nayak, Secretary of the Club, proposed the vote of thanks. Mr. Aaron Lobo compered the programme meticulously.

The formal programme was followed by a colourful cultural extravaganza. Volunteers of the club entertained the audience with classical, semi-classical and modern dances and songs.The programme was sponsored by 'Madd Sobhann' and was attended by around 50 students.

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ

 ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ


ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಐ ಕ್ಯೂ ಎ ಸಿ, ದೈಹಿಕ ಶಿಕ್ಷಣ ವಿಭಾಗ, ವಿದ್ಯಾರ್ಥಿ ಕ್ಷೇಮಪಾಲನ ಸಂಘ, ಎನ್ ಸಿ ಸಿ, ಎನ್ ಎಸ್ ಎಸ್, ರೇಂಜರ್ ಹಾಗೂ ರೋವರ್ ಕ್ಲಬ್, ರೆಡ್ ಕ್ರಾಸ್ ಯುನಿಟ್, ಹಳೆ ವಿದ್ಯಾರ್ಥಿ ಸಂಘ, ರಕ್ಷಕ ಶಿಕ್ಷಕ ಸಂಘ ಹಾಗೂ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕುರು, ರೋಟರಿ ಕ್ಲಬ್ ಬ್ರಹ್ಮಾವರ , ಜೈಂಟ್ಸ್ ಗ್ರೂಪ್ ಬ್ರಹ್ಮಾವರ, ರೆಡ್‌ಕ್ರಾಸ್ ಯುನಿಟ್ ಬ್ರಹ್ಮಾವರ, ವಿಷನ್ ಅಪ್ಪು ಟ್ರಸ್ಟ್ ಬ್ರಹ್ಮಾವರ, ಕರ್ನಾಟಕ ಬ್ಯಾಂಕ್ ಉಪ್ಪಿನಕೋಟೆ ಬ್ರಾಂಚ್ ಇವರೆಲ್ಲರ ಸಹಯೋಗದಲ್ಲಿ ದಿನಾಂಕ 29.08.2026 ಶನಿವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

Play for Nation, Donate for Life ಎಂಬ ಆಶಯದೊಂದಿಗೆ ಆಯೋಜಿಸಲಾದ .ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ರಕ್ತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಅಗತ್ಯವಿರುವವರಿಗೆ ನೆರವಾಗುವ ಮಾನವೀಯ ಮನೋಭಾವವನ್ನು ಬೆಳೆಸುವುದು ಶಿಬಿರದ ಉದ್ದೇಶವಾಗಿತ್ತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ರಮೇಶ್ ವೈದ್ಯ ಅವರು, ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ, ತಂಡದ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಯುವಜನರು ಕ್ರೀಡೆಯೊಂದಿಗೆ ರಕ್ತದಾನದಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ ಎಸ್ ಸಿ ಎಜ್ಯುಕೇಷನಲ್ ಸೊಸೈಟಿ, ಬ್ರಹ್ಮಾವರದ ಅಧ್ಯಕ್ಷರಾದ ರೆ. ಫಾ. ಎಂ.ಸಿ. ಮಥಾಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಅಧ್ಯಕ್ಷರಾದ ಲಯನ್ ಗ್ರೆಗೊರಿ ಡಿ’ಸಿಲ್ವಾ, ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ರೊಟೇರಿಯನ್ ಪ್ರಮೋದ್ ಶೆಟ್ಟಿ, ಜೈಂಟ್ಸ್ ಗ್ರೂಪ್ ಬ್ರಹ್ಮಾವರದ ಪ್ರತಿನಿಧಿಯಾಗಿ ಶ್ರೀ ಸುಂದರ್ ಪೂಜಾರಿ, ರೆಡ್ ಕ್ರಾಸ್ ಘಟಕ ಬ್ರಹ್ಮಾವರದ ಅಧ್ಯಕ್ಷ ರೊಟೇರಿಯನ್ ಉದಯ ಕುಮಾರ್ ಶೆಟ್ಟಿ, ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಅಧ್ಯಕ್ಷ ರೋಟೇರಿಯನ್ ಮಧುಸೂದನ್, ಡೈಮಂಡ್ ಫಿಟ್ನೆಸ್‌ ಬ್ರಹ್ಮಾವರ ಇದರ ಮಾಲೀಕರಾದ ಶ್ರೀ ಮಹೇಶ್ ಸುವರ್ಣ, ಮಯೂರ್ ಫ್ಲೆಕ್ಸ್‌ನ ಮಾಲೀಕರಾದ ರೊಟೇರಿಯನ್ ಮಧುಸೂದನ್ ಮಲ್ಪೆ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರೊ. ಸಖರಾಮ್ ಸೋಮಯಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಉಪಸ್ಥಿತರಿದ್ದರು. ಹಾಗೆಯೇ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಉಡುಪಿ ಜಿಲ್ಲೆಯ ಕಾಲೇಜುಗಳ ಕ್ರೀಡಾ ಸಾಧನೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರವು ಅಗ್ರ ಸ್ಥಾನದಲ್ಲಿದ್ದು, ಆ ಸಾಧನೆಗೆ ಸಹಕರಿಸಿದ ಕಾಲೇಜಿನ ಸಾಧಕ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಓ ಎಸ್ ಸಿ ಎಜ್ಯುಕೇಷನಲ್ ಸೊಸೈಟಿಯ ವತಿಯಿಂದ ಸುಮಾರು ₹ 60,000 ಪ್ರೋತ್ಸಾಹಧನವನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಜೆ., ಐ ಕ್ಯೂ ಎ ಸಿ ಸಂಯೋಜಕರಾದ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಎ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಪದಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಕಾರ್ಯದರ್ಶಿ ದಿವ್ಯ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಘ್ನಶ್ ಉದ್ಘಾಟಕರನ್ನು ಪರಿಚಯಿಸಿ ಹಾಗೂ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಇವರು ವಂದಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಭರತ್ ರಾಜ್ ಎಸ್ ನೇಜರ್ ಇವರು ಪ್ರೋತ್ಸಾಹಧನ ವಿತರಣಾ ಕಾರ್ಯವನ್ನು ನಿರ್ವಹಿಸಿದರು 

ಕ್ರೀಡಾ ಸ್ಫೂರ್ತಿ, ಆರೋಗ್ಯ ಜಾಗೃತಿ ಮತ್ತು ರಕ್ತದಾನದ ಮೂಲಕ ಮಾನವೀಯ ಸೇವೆಯ ಸಂದೇಶವನ್ನು ಸಾರಿ ಸುಮಾರು 90 ವಿದ್ಯಾರ್ಥಿಗಳು ರಕ್ತದಾನ ನೀಡಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.





ಆಟಿ ಖಾದ್ಯ ಪ್ರದರ್ಶನ


 ಎಸ್. ಎಮ್. ಎಸ್ ಕಾಲೇಜು, ಬ್ರಹ್ಮಾವರದ NSS ಘಟಕದ ವತಿಯಿಂದ ಆಟಿ ಖಾದ್ಯ ಕಾರ್ಯಕ್ರಮವನ್ನು 28 ಆಗಸ್ಟ್ 2026ರಂದು ಆಯೋಜಿಸಲಾಯಿತು.ಆಟಿ ತಿಂಗಳ ವಿಶೇಷತೆ ಹಾಗೂ ನಮ್ಮ ಕರಾವಳಿ ಭಾಗದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ವಿವಿಧ ಆಟಿ ಖಾದ್ಯಗಳನ್ನು ಕಾಲೇಜಿಗೆ ತಂದು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಖಾದ್ಯಗಳ ತಯಾರಿಕೆಯ ವಿಧಾನ, ಅದರಲ್ಲಿರುವ ಪೌಷ್ಟಿಕಾಂಶ ಹಾಗೂ ಆಟಿ ತಿಂಗಳಲ್ಲಿ ಅವುಗಳ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರಸನ್ನ ಶೆಟ್ಟಿ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ್ ಉಡುಪ, NSS ಸಹಾಯಕ ಕಾರ್ಯಕ್ರಮಾಧಿಕಾರಿಯಾದ ಕುಮಾರಿ ನಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಮ್ಮ ಕರಾವಳಿ ಸಂಸ್ಕೃತಿ, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಸ್ಥಳೀಯ ಆಹಾರ ಪರಂಪರೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.

Thursday, August 27, 2026

BizLex Challenge – Crossword Puzzle

 


On 27th August 2026, the Department of Commerce , Commerce Association organized the BizLex Challenge ,a Crossword Puzzle as an engaging academic activity to test and enhance students’ knowledge of important concepts and terminology related to Commerce, Business, Accounting, Economics, Marketing, Banking, Finance, and Entrepreneurship.

The activity was designed in the form of a 25-question crossword puzzle, encouraging students to think critically, recall subject related concepts, and solve the clues using their knowledge of business and commerce. A total of 28 students participated in the competition.

The activity provided students with an opportunity to strengthen their subject knowledge, improve their business vocabulary, and develop problem solving and analytical skills. The enthusiastic participation of the students contributed to the successful conduct of the BizLex Challenge – Think. Solve. Succeed!

Overall, the crossword puzzle was a meaningful learning activity that combined academic knowledge with healthy competition and made the learning experience more interactive for the students.

Language Skill Development Demo Classes Held at SMS College, Brahmavar

 

Brahmavar, August 27, 2026:

 A Demo Class on Language Skill Development was organized at SMS College, Brahmavar, to create awareness among students about the importance of language and communication skills in today’s competitive world.

The demo session was conducted by Mr. Ganesh Bhat Founder and Mr. Girish Director Technology Evoltech. 

During the session, the resource persons provided insightful information about the software, its features, and how to use the available resources effectively for language development. They also explained how students can make use of the software to improve their communication skills, language proficiency, and overall confidence.

The session highlighted the growing importance of communication and language skills for students in the present competitive environment. The practical guidance and demonstration helped students understand how technology can be effectively used to develop their language and communication skills.

The programme was graced by the presence of Mr. Prasanna Shetty, Vice Principal, and Mrs. Tweeny Maria Rodrigues, Head of the Department of Commerce Mrs. Asha T K, Convenor of Add on Course , Department of Commerce, presence and support added value to the programme and encouraged the students.

The session was informative, engaging, and beneficial in helping students understand the importance of language skill development.

Friday, August 21, 2026

Emerging Trends in Finance




 The IQAC, HRD, Placement Cell, and Commerce Association jointly organised a programme on “Emerging Trends in Finance” on 20th August 2026. The programme aimed to familiarise students with the changing trends in the field of finance and the career opportunities available to them after graduation.

CA Vinod Chandran, the resource person, provided valuable insights into various career opportunities available after graduation, particularly in the field of finance and related areas. He highlighted different career paths, professional courses, skill requirements, and the importance of continuous learning and professional development.

ಸ್ವಚ್ಛತಾ ಅಭಿಯಾನ




 SMS ಕಾಲೇಜು, ಬ್ರಹ್ಮಾವರದ NSS ಘಟಕದ ವತಿಯಿಂದ ವಾರಂಬಳ್ಳಿ ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಬ್ರಹ್ಮಾವರ ಹಾಗೂ ರೋಟರಾಕ್ಟ್ ಕ್ಲಬ್‌ಗಳ ಸಹಯೋಗದೊಂದಿಗೆ ಬ್ರಹ್ಮಾವರ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಪರಿಸರ ಸ್ವಚ್ಛತೆ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಸೇವಾ ಮನೋಭಾವ ಬೆಳೆಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ಶ್ರೀ ಪ್ರಮೋದ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬ್ರಹ್ಮಾವರದ ಕಾರ್ಯದರ್ಶಿ ಶ್ರೀ ಅರುಣ್ ಕುಮಾರ್, ರೋಟರಿಯ ಜಿಲ್ಲಾ ಪ್ರಾಜೆಕ್ಟ್ ಚೇರ್ಮನ್ ಶ್ರೀ ಅರುಣ್ ಕುಮಾರ್ ಶೆಟ್ಟಿ, ಶ್ರೀ ದಿನೇಶ್ ನಾಯರಿ, ರೋಟರಾಕ್ಟ್ ಕ್ಲಬ್‌ನ ಅಧ್ಯಕ್ಷರಾದ ಶ್ರೀ ಮಧುಸೂಧನ್, ರೋಟರಿ ಕ್ಲಬ್ ಬ್ರಹ್ಮಾವರದ ಸದಸ್ಯರಾದ ಶ್ರೀ ಶ್ರೀಧರ್ ಭಂಡಾರಿ ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀ ಶೇಖರ್ ನಾಯ್ಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ SMS ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ಅವರು ಮಾತನಾಡಿ, ಸ್ವಚ್ಛತೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಸ್ವಚ್ಛ ಪರಿಸರವು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಇಂತಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾಜಕ್ಕೆ ಉತ್ತಮ ಮಾದರಿಯಾಗಬೇಕು ಎಂದು ಕರೆ ನೀಡಿದರು.

ನಂತರ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀ ಪ್ರಮೋದ್ ಶೆಟ್ಟಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ, NSS ಸ್ವಯಂಸೇವಕರು ಹಾಗೂ ಸಹಯೋಗಿ ಸಂಸ್ಥೆಗಳು ಕೈಗೊಂಡಿರುವ ಸ್ವಚ್ಛತಾ ಕಾರ್ಯವನ್ನು ಶ್ಲಾಘಿಸಿದರು. ಸ್ವಚ್ಛತೆ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಭಾಗವಾಗಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ NSS ಸ್ವಯಂಸೇವಕರು, ವಾರಂಬಳ್ಳಿ ಗ್ರಾಮ ಪಂಚಾಯತ್, ರೋಟರಿ ಹಾಗೂ ರೋಟರಾಕ್ಟ್ ಕ್ಲಬ್‌ನ ಸದಸ್ಯರು ಒಟ್ಟಾಗಿ ಬ್ರಹ್ಮಾವರ ಪರಿಸರದಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಂಡರು. ಸಾರ್ವಜನಿಕ ಸ್ಥಳಗಳಲ್ಲಿದ್ದ ತ್ಯಾಜ್ಯವನ್ನು ಸಂಗ್ರಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಈ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮವನ್ನು NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ್ ಉಡುಪ ಅವರ ನೇತೃತ್ವದಲ್ಲಿ ಆಯೋಜಿಸಲಾಯಿತು. NSS ಸ್ವಯಂಸೇವಕರು ಹಾಗೂ ಎಲ್ಲಾ ಸಹಯೋಗಿ ಸಂಸ್ಥೆಗಳ ಪ್ರತಿನಿಧಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

ಒಟ್ಟಾರೆಯಾಗಿ, ಈ ಸ್ವಚ್ಛತಾ ಅಭಿಯಾನವು NSS, ವಾರಂಬಳ್ಳಿ ಗ್ರಾಮ ಪಂಚಾಯತ್, ರೋಟರಿ ಹಾಗೂ ರೋಟರಾಕ್ಟ್ ಕ್ಲಬ್‌ಗಳ ಸಹಯೋಗದ ಮೂಲಕ ಸಮುದಾಯದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವ ಅರ್ಥಪೂರ್ಣ ಕಾರ್ಯಕ್ರಮವಾಗಿ ಮೂಡಿಬಂದಿತು.

Thursday, August 13, 2026

Buguri 2026 – Rural Sports Competition Held Grandly at St. Mary’s Syrian College, Brahmavar

 Buguri 2026 – Rural Sports Competition Held Grandly at St. Mary’s Syrian College, Brahmavar


Brahmavar, August 12, 2026:

St. Mary’s Syrian College, Brahmavar, organised “Buguri 2026 – Rural Sports Competition”, as part of the Aasadi Kundapura Kannada Day Celebration, with great enthusiasm and participation from students. The programme, held on 12 August 2026, successfully celebrated the rich tradition of rural sports, local culture and the spirit of community.

The event began with an inauguration ceremony and a cultural-theme-based dance, setting a vibrant and festive tone for the day. Students enthusiastically participated in a variety of traditional and fun-filled rural sporting activities, bringing back the charm of indigenous games to the campus.

The competitions included Ball Passing, Backward Running, Pyramid, Tug of War, Areca Leaf Event, Carrying on Back and Three-Leg Race. The Tug of War, conducted in different rounds, emerged as one of the major attractions of the event, witnessing intense competition, teamwork and tremendous cheering from fellow students.

The programme provided students with an opportunity to experience traditional games while promoting team spirit, physical fitness, coordination, sportsmanship and cultural awareness. The vibrant participation of both boys and girls added colour and energy to the celebrations.

The entire event was conducted in a festive rural setting, reflecting the cultural atmosphere of coastal Karnataka. The participation of students, the enthusiastic support of the college community and the exciting sporting moments made Buguri 2026 a grand and memorable success.

The programme successfully demonstrated that traditional rural games can continue to inspire and unite the younger generation while preserving the cultural heritage of the region. The event concluded on a high note, leaving students and organisers with memorable experiences and a renewed appreciation for traditional sports and local culture.Buguri 2026 was indeed a grand celebration of tradition, teamwork, sportsmanship and the vibrant spirit of rural Karnataka.

NSS ಓರಿಯಂಟೇಶನ್

 


ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಪ್ರಥಮ ವರ್ಷದ NSS ಸ್ವಯಂಸೇವಕರಿಗಾಗಿ ಓರಿಯಂಟೇಶನ್ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರೊಡ್ರಿಗಸ್ ವಹಿಸಿದ್ದರು.

ಕಾರ್ಯಕ್ರಮದಲ್ಲಿ NSSನ ಉದ್ದೇಶ, ಧ್ಯೇಯ ಮತ್ತು ಕಾರ್ಯವೈಖರಿ ಹಾಗೂ ಸ್ವಯಂಸೇವಕರ ಜವಾಬ್ದಾರಿಗಳ ಕುರಿತು ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ್ ಉಡುಪ ಅವರು ಮಾರ್ಗದರ್ಶನ ನೀಡಿದರು. NSS ಮೂಲಕ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ನಾಯಕತ್ವ ಗುಣ, ಶಿಸ್ತು, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರಪ್ರೇಮವನ್ನು ಬೆಳೆಸುವ ಮಹತ್ವವನ್ನು ವಿವರಿಸಲಾಯಿತು.

NSS ಸ್ವಯಂಸೇವಕರು ವಿವಿಧ ಸಾಮಾಜಿಕ, ಶೈಕ್ಷಣಿಕ, ಪರಿಸರ ಸಂರಕ್ಷಣಾ, ಸ್ವಚ್ಛತಾ ಹಾಗೂ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಪ್ರೇರೇಪಿಸಲಾಯಿತು. ಸಮಾಜದ ಅಗತ್ಯಗಳನ್ನು ಅರಿತು, ಜನರೊಂದಿಗೆ ಸಹಕಾರದಿಂದ ಕಾರ್ಯನಿರ್ವಹಿಸುವುದು NSS ಸ್ವಯಂಸೇವಕರ ಪ್ರಮುಖ ಕರ್ತವ್ಯವಾಗಿದೆ ಎಂದು ತಿಳಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ರಾಬರ್ಟ್ ರೊಡ್ರಿಗಸ್ ಅವರು ವಿದ್ಯಾರ್ಥಿಗಳು NSS ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರ ಜೊತೆಗೆ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.

ಪ್ರಥಮ ವರ್ಷದ ಸ್ವಯಂಸೇವಕರಿಗೆ NSSನ ವಿವಿಧ ಚಟುವಟಿಕೆಗಳು ಮತ್ತು ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು. ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.

Friday, July 31, 2026

ಯುವ ಜನತೆ ಮತ್ತು ಮಾನಸಿಕ ಆರೋಗ್ಯ : ಮಾಹಿತಿ ಕಾರ್ಯಾಗಾರ

 

ಎಸ್ ಎಂ ಎಸ್  ಕಾಲೇಜು ಬ್ರಹ್ಮಾವರ ಇಲ್ಲಿನ ಮಹಿಳಾ ವೇದಿಕೆಯ ವತಿಯಿಂದ ದಿನಾಂಕ 31/7/2026 ಶುಕ್ರವಾರ ಪ್ರಥಮ ವರ್ಷದ ಬಿ ಎ, ಬಿ ಕಾಂ, ಬಿಸಿಎ ಎಲ್ಲಾ ವಿದ್ಯಾರ್ಥಿಗಳಿಗೆ  ಓರಿಯoಟೇಷನ್  ಕಾರ್ಯಕ್ರಮವನ್ನು ಆಯೋಜಿಸಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ  ಆಪ್ತಸಲಹೆಗಾರರು ಹಾಗೂ  ತರಬೇತುದಾರರಗಿರುವ ಸಿಸ್ಟರ್ ಲಿಲ್ಲಿ ಪುಷ್ಪ ಇವರು ಆಗಮಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು. ಕಾಲೇಜಿನ ಉಪ ಪ್ರಾಂಶುಪಾಲರು  ಆಗಿರುವ ಶ್ರೀಯುತ ಪ್ರಸನ್ನ ಶೆಟ್ಟಿ  ಐ ಕ್ಯೂ ಎ ಸಿ ಸಂಯೋಜಕರಾದ  ಲೆಫ್ಟಿಂನೆಂಟ್ ಅಶ್ವಿನ್ ಶೆಟ್ಟಿ  ಹಾಗೂ ಮಹಿಳಾ ವೇದಿಕೆಯ ಸಲಹೆಗಾರರಾದ ಡಾ ವಿದ್ಯಾಲತ ಉಪಸ್ಥಿತರಿದ್ದರು.ಇಂಗ್ಲೀಷ್ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಸಿಮಾ ಲೂಯಿಸ್ ಹಾಗೂ ರಾಜ್ಯಶಾಸ್ತ್ರ ವಿಭಾಗ  ಮುಖ್ಯಸ್ಥರಾದ ಶ್ರೀಮತಿ ಮಮತ ಮೇರಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಮಾರಿ ಕೀರ್ತನ ಪ್ರಾರ್ಥನೆಮಾಡಿದರು.