⚡ Latest News ⚡

Upcoming Events : 🔥 🔴🔥 Cooking with fire, Talents Day, Sports Day🔥

Thursday, September 10, 2026

ರಾಷ್ಟ್ರೀಯ ಸೇವಾ ಯೋಜನೆ (NSS) ಉದ್ಘಾಟನಾ ಕಾರ್ಯಕ್ರಮ

 ರಾಷ್ಟ್ರೀಯ ಸೇವಾ ಯೋಜನೆ (NSS) ಉದ್ಘಾಟನಾ ಕಾರ್ಯಕ್ರಮ


SMS ಕಾಲೇಜು, ಬ್ರಹ್ಮಾವರದ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕದ ವತಿಯಿಂದ NSS ಉದ್ಘಾಟನಾ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು SMS ಕಾಲೇಜು, ಬ್ರಹ್ಮಾವರದ ಪ್ರಾಂಶುಪಾಲರಾದ ಡಾ. ರಾಬರ್ಟ್ ರೋಡ್ರಿಗಸ್ ಅವರು ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀ ಸುಧಾಕರ್ ವಕ್ವಾಡಿ ಅವರು ಉದ್ಘಾಟಿಸಿದರು.

NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, NSSನ ಉದ್ದೇಶ, ಮಹತ್ವ ಹಾಗೂ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವವನ್ನು ಬೆಳೆಸುವಲ್ಲಿ NSSನ ಪಾತ್ರದ ಕುರಿತು ವಿವರಿಸಿದರು. ಸಮಾಜಮುಖಿ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಹಾಗೂ ಸೇವೆಯ ಮೂಲಕ ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಸುಧಾಕರ್ ವಕ್ವಾಡಿ ಅವರು, ವಿದ್ಯಾರ್ಥಿ ಜೀವನದಲ್ಲಿ NSSನ ಮಹತ್ವವನ್ನು ವಿವರಿಸಿದರು. NSS ಕೇವಲ ಒಂದು ಸಂಘಟನೆಯಾಗಿರದೆ, ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು, ನಾಯಕತ್ವ, ಸಹಕಾರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆಯಾಗಿದೆ ಎಂದು ಹೇಳಿದರು. ಸಮಾಜದಲ್ಲಿನ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳ ಪರಿಹಾರಕ್ಕಾಗಿ ವಿದ್ಯಾರ್ಥಿಗಳು ತಮ್ಮ ಸಮಯ ಮತ್ತು ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. ಯುವಜನತೆ ದೇಶದ ಭವಿಷ್ಯವಾಗಿದ್ದು, ಉತ್ತಮ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.


ಅಧ್ಯಕ್ಷೀಯ ಭಾಷಣದಲ್ಲಿ ಡಾ. ರಾಬರ್ಟ್ ರೋಡ್ರಿಗಸ್, ಪ್ರಾಂಶುಪಾಲರು, SMS ಕಾಲೇಜು, ಬ್ರಹ್ಮಾವರ, ಅವರು NSS ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸುವಂತೆ ಕರೆ ನೀಡಿದರು. NSS ಮೂಲಕ ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜೊತೆಗೆ ಸಾಮಾಜಿಕ ಅರಿವು, ಮಾನವೀಯ ಮೌಲ್ಯಗಳು ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಸಮಾಜದ ಒಳಿತಿಗಾಗಿ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು. NSS ಸ್ವಯಂಸೇವಕರು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸುವ ರೀತಿಯಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ನಿರೂಪಣೆಯನ್ನು ದ್ವಿತೀಯ BCA ವಿದ್ಯಾರ್ಥಿನಿ ಕುಮಾರಿ ಸ್ವಾತಿ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ದ್ವಿತೀಯ BCA ವಿದ್ಯಾರ್ಥಿ ಸಂಕೇತ್ ಅವರು ಸ್ವಾಗತ ಭಾಷಣ ನೆರವೇರಿಸಿ, ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು.

ನಂತರ ದ್ವಿತೀಯ BCA ವಿದ್ಯಾರ್ಥಿ ರತಿಕ್ ಅವರ ನೇತೃತ್ವದಲ್ಲಿ NSS ಸ್ವಯಂಸೇವಕರು NSS ಪ್ರತಿಜ್ಞೆಯನ್ನು ಸ್ವೀಕರಿಸಿದರು. ಪ್ರತಿಜ್ಞೆಯ ಮೂಲಕ ಸಮಾಜ ಸೇವೆ, ಶಿಸ್ತು, ಜವಾಬ್ದಾರಿ ಹಾಗೂ ರಾಷ್ಟ್ರ ಸೇವೆಯ ಬದ್ಧತೆಯನ್ನು ವ್ಯಕ್ತಪಡಿಸಲಾಯಿತು.

ಕಾರ್ಯಕ್ರಮದ ಕೊನೆಯಲ್ಲಿ ದ್ವಿತೀಯ B.Com ವಿದ್ಯಾರ್ಥಿನಿ ಕುಮಾರಿ ಕೀರ್ತನಾ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಅಧ್ಯಕ್ಷರು, ಉದ್ಘಾಟಕರು, ಅಧ್ಯಾಪಕರು, NSS ಕಾರ್ಯಕ್ರಮಾಧಿಕಾರಿಗಳು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣಗಳು ಹಾಗೂ ರಾಷ್ಟ್ರ ಸೇವೆಯ ಬದ್ಧತೆಯನ್ನು ಬೆಳೆಸುವ ಸಾರ್ಥಕ ಪ್ರಯತ್ನವಾಗಿ ಯಶಸ್ವಿಯಾಗಿ ನೆರವೇರಿತು.

Career Guidance and Competitive Examinations Programme Held at SMS College

 

Career Guidance and Competitive Examinations Programme Held at SMS College


Brahmavar: 07-09-2026, Monday .

St. Mary’s Syrian College, Brahmavar, organised a programme on “Career Guidance and Competitive Examinations” for the first-year students with the objective of creating awareness about career opportunities and motivating students to prepare for various competitive examinations.

The programme was presided over by Dr. Robert Rodrigues J., Principal, St. Mary’s Syrian College, Brahmavar. Dr. Sakaram Somayaji was the Chief Guest, while Mr. Chandrakanth V. Chanthar served as the Resource Person.

Addressing the students, the Resource Person provided valuable guidance on career planning, competitive examinations and the importance of early preparation. The session encouraged students to identify suitable career paths and develop the knowledge, skills and discipline required to succeed in competitive examinations.

The programme was attended by all first-year students, who actively participated in the session and benefited from the guidance provided. Such programmes play an important role in helping students understand opportunities beyond their regular academic curriculum. The college has been actively promoting guidance related to competitive examinations and career development as part of its student-support initiatives.

Ms. Divyajyothi, Final B.Com, served as the Master of Ceremonies. Ms. Shriraksha, Final B.Com and Secretary of Competitive Examinations, was present on the occasion. The programme concluded with the vote of thanks proposed by Mr. Vighnesh Padiyar, Convenor of Competitive Examinations, who expressed gratitude to the Principal, Chief Guest, Resource Person, faculty members and students for their valuable contribution and participation.

The programme was informative and motivating, providing first-year students with useful insights into career opportunities and the significance of systematic preparation for competitive examinations.

Tuesday, September 8, 2026

Extension Activity of the Department of English

 Extension Activity of the Department of English

On 7 September 2026, B.A. English Optional students visited SMS English Medium School (State Syllabus) along with English Language teachers from SMS Degree College.

They engaged the school children through rhymes, drawing, singing, indoor games, and other activities. The programme helped the college students apply their knowledge while developing communication, leadership, creativity, teamwork, and teaching skills.

The activity benefited both groups by promoting joyful learning, social responsibility, empathy, and community engagement.



Sunday, August 30, 2026

Two-Day Soft Skills Training Programme

 Two-Day Soft Skills Training Programme

A two-day Soft Skills Training Programme was organised for the final year B.Com students of the college at the Ramakrishna Hegde Skill Development Centre (RHSDC), Udupi, on 24 and 28 August 2026. The programme was conducted in collaboration with the Konkan Railway Academy, Madgaon and aimed at enhancing the students’ professional and employability skills.

The first day featured sessions on Leadership Qualities, CV Writing and Interview Techniques, and Employment Opportunities in Railways. The sessions were handled by Dr. Mithun S. Ullal, and Mr. Shridhara Avabhrath, Manager, T&D, KRCL, respectively.

The second day focused on Communication Skills and Office Etiquettes, with sessions conducted by Dr. Vrinda and Dr. Shilpa. The training provided students with valuable exposure to essential workplace skills, professional communication, interview preparation and career opportunities.

Saturday, August 29, 2026

Konkani Manyata Divas Celebrated at SMS College, Brahmavar

 

Brahmavar, 28th August 2026: The Konkani Club of St. Mary's Syrian College (SMS College), Brahmavar, celebrated Konkani Manyata Divas with a vibrant cultural programme at the Rev. Fr. P. G. Koshy Memorial Auditorium on Friday.

The programme was presided over by Mr. Prasanna Shetty, Vice Principal of the college. In his presidential address, he appreciated the endeavours of the Konkani Club as an effective platform for students to exhibit their talents and emphasized the need for greater coordination among different Konkani dialects for the overall enrichment of the language and culture.

The programme commenced with a prayer led by Ms. Keerthana. Mr. Alfred Furtado, Convener of the Konkani Club, spoke on the relevance of the day and highlighted the importance of unity among Konkani speaking communities.

The formal function included unfurling of the Konkani flag and singing of the Konkani Anthem.Ms. Kavana Nayak, Secretary of the Club, proposed the vote of thanks. Mr. Aaron Lobo compered the programme meticulously.

The formal programme was followed by a colourful cultural extravaganza. Volunteers of the club entertained the audience with classical, semi-classical and modern dances and songs.The programme was sponsored by 'Madd Sobhann' and was attended by around 50 students.

ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ

 ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ರಕ್ತದಾನ ಶಿಬಿರ


ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಐ ಕ್ಯೂ ಎ ಸಿ, ದೈಹಿಕ ಶಿಕ್ಷಣ ವಿಭಾಗ, ವಿದ್ಯಾರ್ಥಿ ಕ್ಷೇಮಪಾಲನ ಸಂಘ, ಎನ್ ಸಿ ಸಿ, ಎನ್ ಎಸ್ ಎಸ್, ರೇಂಜರ್ ಹಾಗೂ ರೋವರ್ ಕ್ಲಬ್, ರೆಡ್ ಕ್ರಾಸ್ ಯುನಿಟ್, ಹಳೆ ವಿದ್ಯಾರ್ಥಿ ಸಂಘ, ರಕ್ಷಕ ಶಿಕ್ಷಕ ಸಂಘ ಹಾಗೂ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕುರು, ರೋಟರಿ ಕ್ಲಬ್ ಬ್ರಹ್ಮಾವರ , ಜೈಂಟ್ಸ್ ಗ್ರೂಪ್ ಬ್ರಹ್ಮಾವರ, ರೆಡ್‌ಕ್ರಾಸ್ ಯುನಿಟ್ ಬ್ರಹ್ಮಾವರ, ವಿಷನ್ ಅಪ್ಪು ಟ್ರಸ್ಟ್ ಬ್ರಹ್ಮಾವರ, ಕರ್ನಾಟಕ ಬ್ಯಾಂಕ್ ಉಪ್ಪಿನಕೋಟೆ ಬ್ರಾಂಚ್ ಇವರೆಲ್ಲರ ಸಹಯೋಗದಲ್ಲಿ ದಿನಾಂಕ 29.08.2026 ಶನಿವಾರದಂದು ಕಾಲೇಜಿನ ಮುಖ್ಯ ಸಭಾಂಗಣದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ರಕ್ತದಾನ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

Play for Nation, Donate for Life ಎಂಬ ಆಶಯದೊಂದಿಗೆ ಆಯೋಜಿಸಲಾದ .ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ರಕ್ತದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದರೊಂದಿಗೆ, ಅಗತ್ಯವಿರುವವರಿಗೆ ನೆರವಾಗುವ ಮಾನವೀಯ ಮನೋಭಾವವನ್ನು ಬೆಳೆಸುವುದು ಶಿಬಿರದ ಉದ್ದೇಶವಾಗಿತ್ತು.


ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಶ್ರೀ ರಮೇಶ್ ವೈದ್ಯ ಅವರು, ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣ, ತಂಡದ ಮನೋಭಾವ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಯುವಜನರು ಕ್ರೀಡೆಯೊಂದಿಗೆ ರಕ್ತದಾನದಂತಹ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ ಎಸ್ ಸಿ ಎಜ್ಯುಕೇಷನಲ್ ಸೊಸೈಟಿ, ಬ್ರಹ್ಮಾವರದ ಅಧ್ಯಕ್ಷರಾದ ರೆ. ಫಾ. ಎಂ.ಸಿ. ಮಥಾಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಾವರ-ಬಾರ್ಕೂರು ಇದರ ಅಧ್ಯಕ್ಷರಾದ ಲಯನ್ ಗ್ರೆಗೊರಿ ಡಿ’ಸಿಲ್ವಾ, ರೋಟರಿ ಕ್ಲಬ್ ಬ್ರಹ್ಮಾವರದ ಅಧ್ಯಕ್ಷರಾದ ರೊಟೇರಿಯನ್ ಪ್ರಮೋದ್ ಶೆಟ್ಟಿ, ಜೈಂಟ್ಸ್ ಗ್ರೂಪ್ ಬ್ರಹ್ಮಾವರದ ಪ್ರತಿನಿಧಿಯಾಗಿ ಶ್ರೀ ಸುಂದರ್ ಪೂಜಾರಿ, ರೆಡ್ ಕ್ರಾಸ್ ಘಟಕ ಬ್ರಹ್ಮಾವರದ ಅಧ್ಯಕ್ಷ ರೊಟೇರಿಯನ್ ಉದಯ ಕುಮಾರ್ ಶೆಟ್ಟಿ, ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಅಧ್ಯಕ್ಷ ರೋಟೇರಿಯನ್ ಮಧುಸೂದನ್, ಡೈಮಂಡ್ ಫಿಟ್ನೆಸ್‌ ಬ್ರಹ್ಮಾವರ ಇದರ ಮಾಲೀಕರಾದ ಶ್ರೀ ಮಹೇಶ್ ಸುವರ್ಣ, ಮಯೂರ್ ಫ್ಲೆಕ್ಸ್‌ನ ಮಾಲೀಕರಾದ ರೊಟೇರಿಯನ್ ಮಧುಸೂದನ್ ಮಲ್ಪೆ, ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪ್ರೊ. ಸಖರಾಮ್ ಸೋಮಯಾಜಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮಂಜುನಾಥ್ ಉಪಸ್ಥಿತರಿದ್ದರು. ಹಾಗೆಯೇ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೊಳಪಟ್ಟ ಉಡುಪಿ ಜಿಲ್ಲೆಯ ಕಾಲೇಜುಗಳ ಕ್ರೀಡಾ ಸಾಧನೆಯಲ್ಲಿ ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರವು ಅಗ್ರ ಸ್ಥಾನದಲ್ಲಿದ್ದು, ಆ ಸಾಧನೆಗೆ ಸಹಕರಿಸಿದ ಕಾಲೇಜಿನ ಸಾಧಕ ಕ್ರೀಡಾಪಟುಗಳಿಗೆ ಈ ಸಂದರ್ಭದಲ್ಲಿ ಓ ಎಸ್ ಸಿ ಎಜ್ಯುಕೇಷನಲ್ ಸೊಸೈಟಿಯ ವತಿಯಿಂದ ಸುಮಾರು ₹ 60,000 ಪ್ರೋತ್ಸಾಹಧನವನ್ನು ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಜೆ., ಐ ಕ್ಯೂ ಎ ಸಿ ಸಂಯೋಜಕರಾದ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಎ. ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ವೆಂಕಟೇಶ್ ಭಟ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಪದಾಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವಿದ್ಯಾರ್ಥಿ ಕ್ಷೇಮಪಾಲನ ಸಂಘದ ಕಾರ್ಯದರ್ಶಿ ದಿವ್ಯ ಜ್ಯೋತಿ ಕಾರ್ಯಕ್ರಮ ನಿರೂಪಿಸಿ, ಪ್ರಾಂಶುಪಾಲರಾದ ಡಾ. ರೋಬರ್ಟ್ ರೋಡ್ರಿಗಸ್ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ವಿಘ್ನಶ್ ಉದ್ಘಾಟಕರನ್ನು ಪರಿಚಯಿಸಿ ಹಾಗೂ ಲೆಫ್ಟಿನೆಂಟ್ ಅಶ್ವಿನ್ ಶೆಟ್ಟಿ ಇವರು ವಂದಿಸಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ ಭರತ್ ರಾಜ್ ಎಸ್ ನೇಜರ್ ಇವರು ಪ್ರೋತ್ಸಾಹಧನ ವಿತರಣಾ ಕಾರ್ಯವನ್ನು ನಿರ್ವಹಿಸಿದರು 

ಕ್ರೀಡಾ ಸ್ಫೂರ್ತಿ, ಆರೋಗ್ಯ ಜಾಗೃತಿ ಮತ್ತು ರಕ್ತದಾನದ ಮೂಲಕ ಮಾನವೀಯ ಸೇವೆಯ ಸಂದೇಶವನ್ನು ಸಾರಿ ಸುಮಾರು 90 ವಿದ್ಯಾರ್ಥಿಗಳು ರಕ್ತದಾನ ನೀಡಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.





ಆಟಿ ಖಾದ್ಯ ಪ್ರದರ್ಶನ


 ಎಸ್. ಎಮ್. ಎಸ್ ಕಾಲೇಜು, ಬ್ರಹ್ಮಾವರದ NSS ಘಟಕದ ವತಿಯಿಂದ ಆಟಿ ಖಾದ್ಯ ಕಾರ್ಯಕ್ರಮವನ್ನು 28 ಆಗಸ್ಟ್ 2026ರಂದು ಆಯೋಜಿಸಲಾಯಿತು.ಆಟಿ ತಿಂಗಳ ವಿಶೇಷತೆ ಹಾಗೂ ನಮ್ಮ ಕರಾವಳಿ ಭಾಗದ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ತಯಾರಿಸಲಾದ ವಿವಿಧ ಆಟಿ ಖಾದ್ಯಗಳನ್ನು ಕಾಲೇಜಿಗೆ ತಂದು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಖಾದ್ಯಗಳ ತಯಾರಿಕೆಯ ವಿಧಾನ, ಅದರಲ್ಲಿರುವ ಪೌಷ್ಟಿಕಾಂಶ ಹಾಗೂ ಆಟಿ ತಿಂಗಳಲ್ಲಿ ಅವುಗಳ ಮಹತ್ವದ ಕುರಿತು ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರಸನ್ನ ಶೆಟ್ಟಿ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಪ್ರಯತ್ನವನ್ನು ಶ್ಲಾಘಿಸಿದರು. NSS ಕಾರ್ಯಕ್ರಮಾಧಿಕಾರಿಗಳಾದ ಶ್ರೀ ಪ್ರಕಾಶ್ ನಾಯಕ್ ಹಾಗೂ ಡಾ. ಮಂಜುನಾಥ್ ಉಡುಪ, NSS ಸಹಾಯಕ ಕಾರ್ಯಕ್ರಮಾಧಿಕಾರಿಯಾದ ಕುಮಾರಿ ನಕ್ಷಿತಾ ಶೆಟ್ಟಿ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನಮ್ಮ ಕರಾವಳಿ ಸಂಸ್ಕೃತಿ, ಸಾಂಪ್ರದಾಯಿಕ ಆಹಾರ ಪದ್ಧತಿ ಮತ್ತು ಸ್ಥಳೀಯ ಆಹಾರ ಪರಂಪರೆಯ ಬಗ್ಗೆ ಅರಿವು ಮೂಡಿಸುವಲ್ಲಿ ಸಹಕಾರಿಯಾಯಿತು.

Thursday, August 27, 2026

BizLex Challenge – Crossword Puzzle

 


On 27th August 2026, the Department of Commerce , Commerce Association organized the BizLex Challenge ,a Crossword Puzzle as an engaging academic activity to test and enhance students’ knowledge of important concepts and terminology related to Commerce, Business, Accounting, Economics, Marketing, Banking, Finance, and Entrepreneurship.

The activity was designed in the form of a 25-question crossword puzzle, encouraging students to think critically, recall subject related concepts, and solve the clues using their knowledge of business and commerce. A total of 28 students participated in the competition.

The activity provided students with an opportunity to strengthen their subject knowledge, improve their business vocabulary, and develop problem solving and analytical skills. The enthusiastic participation of the students contributed to the successful conduct of the BizLex Challenge – Think. Solve. Succeed!

Overall, the crossword puzzle was a meaningful learning activity that combined academic knowledge with healthy competition and made the learning experience more interactive for the students.

Language Skill Development Demo Classes Held at SMS College, Brahmavar

 

Brahmavar, August 27, 2026:

 A Demo Class on Language Skill Development was organized at SMS College, Brahmavar, to create awareness among students about the importance of language and communication skills in today’s competitive world.

The demo session was conducted by Mr. Ganesh Bhat Founder and Mr. Girish Director Technology Evoltech. 

During the session, the resource persons provided insightful information about the software, its features, and how to use the available resources effectively for language development. They also explained how students can make use of the software to improve their communication skills, language proficiency, and overall confidence.

The session highlighted the growing importance of communication and language skills for students in the present competitive environment. The practical guidance and demonstration helped students understand how technology can be effectively used to develop their language and communication skills.

The programme was graced by the presence of Mr. Prasanna Shetty, Vice Principal, and Mrs. Tweeny Maria Rodrigues, Head of the Department of Commerce Mrs. Asha T K, Convenor of Add on Course , Department of Commerce, presence and support added value to the programme and encouraged the students.

The session was informative, engaging, and beneficial in helping students understand the importance of language skill development.

Friday, August 21, 2026

Emerging Trends in Finance




 The IQAC, HRD, Placement Cell, and Commerce Association jointly organised a programme on “Emerging Trends in Finance” on 20th August 2026. The programme aimed to familiarise students with the changing trends in the field of finance and the career opportunities available to them after graduation.

CA Vinod Chandran, the resource person, provided valuable insights into various career opportunities available after graduation, particularly in the field of finance and related areas. He highlighted different career paths, professional courses, skill requirements, and the importance of continuous learning and professional development.