⚡ Latest News ⚡

Upcoming Events : "🔥 🔴 Placement Drive", "🟩 Traditional DAY", "💻 IT Fest", "📊 Commerce Fest", "🌍 Humanity Fest", "🚌 Study Tour", "✍️ Competitive Exam Training", "🏏 Inter Collegiate Cricket"

Saturday, March 23, 2024

ತಿಲ್ಲಾನ - 2024

 

ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ತಿಲ್ಲಾನ- 2024



ಎಸ್ ಎಂ ಎಸ್ ಕಾಲೇಜು ಬ್ರಹ್ಮಾವರ  ಇದರ ವಿದ್ಯಾರ್ಥಿ ಸಂಘ ಆಯೋಜಿಸಿರುವ  ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ತಿಲ್ಲಾನ 2024  ಕಾಲೇಜಿನ ದಿ ವಸಂತ ಶೆಟ್ಟಿ ಸ್ಮಾರಕ ರಂಗಮಂಟಪದಲ್ಲಿ ನೆರವೇರಿತು.  ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ರೆ. ಫಾ ಎಂ. ಸಿ  ಮಾತಾಯಿ ಅವರು ವಹಿಸಿದ್ದರು ಮುಖ್ಯ ಅಥಿತಿಗಳಾದ ಸಾಹಿತಿ, ಆಕಾಶವಾಣಿ ಹಾಗೂ ದೊರದರ್ಶನ ಕಲಾವಿದೆ  ಶ್ರೀಮತಿ ವಸಂತಿ ಶೆಟ್ಟಿ ಬ್ರಹ್ಮಾವರ ಇವರು  ಕಾರ್ಯಕ್ರಮ ವನ್ನು ಉದ್ಘಾತಿಸಿದರು .

 14 ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.  ಸಮಾರೋಪ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಗಳಾದ ವಿದುಷಿ ಸುಮಂಗಲ ರತ್ನಾಕರ  ಇವರು  ವಿಜೇತರಿಗೆ  ಬಹುಮಾನಗಳನ್ನು ನೀಡಿದರು.ಸಮಗ್ರ ತಂಡ ಪ್ರಶಸ್ತಿ  ಪ್ರಥಮ ಸ್ಥಾನವನ್ನು  ಶಂಕರನಾರಾಯಣ ಕಾಲೇಜು  ದ್ವಿತೀಯ ಸ್ಥಾನವನ್ನು  ಭಂಡಾ ರ್ಕರ್ಸ್ ಕಾಲೇಜು ಕುಂದಾಪುರ ಹಾಗೂ ತೃತೀಯ ಸ್ಥಾನವನ್ನು ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ  ಇವರು ಪಡೆದುಕೊಂಡರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲಾರದ ಡಾ. ಮಂಜುನಾಥ ಉಡುಪ  ಕೆ,  ಆಡಳಿತ ಮಂಡಳಿಯ ಸದಸ್ಯರು.    ಹಾಗೂ ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಡಾ. ವಿದ್ಯಾಲತ  ಹಾಗೂ  ಅರುಣ್ ಕುಮಾರ್  ಮತ್ತು ವಿದ್ಯಾರ್ಥಿ ಸಂಘದ  ಪದಾಧಿಕಾರಿಗಳು ಇವರು ಉಪಸ್ಥಿತರಿದ್ದರು.

No comments: