ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಪ್ರಜಾಪ್ರಭುತ್ವ ಮತ್ತು ಯುವಜನರ ಭಾಗವಹಿಸುವಿಕೆ
ದಿನಾಂಕ:-24/09/2025 ರ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಬ್ರಹ್ಮಾವರ IQAC ಹಾಗೂ ರಾಜ್ಯಶಾಸ್ತ್ರ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಪ್ರಜಾಪ್ರಭುತ್ವ ಮತ್ತು ಯುವಜನರ ಭಾಗವಹಿಸುವಿಕೆ ಎಂಬ ಕಾರ್ಯಕ್ರಮವನ್ನು ಕಾಲೇಜಿನ ಮಿನಿ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ.ರಾಬರ್ಟ್ ರೋಡ್ರಿಗಸ್ ಜೆ .ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಯಾನಂದ ಡಿ ಕೀದಿಯೂರು , ನಿವೃತ್ತ ರಾಜಶಾಸ್ತ್ರ ಉಪನ್ಯಾಸಕರು ಪದವಿ ಪೂರ್ವ ಕಾಲೇಜು ಉಡುಪಿಕಾಲೇಜು,ಇವರು ಆಗಮಿಸಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಮಮತಾ ,ಉಪನ್ಯಾಸಕಿ ಶ್ರೀಮತಿ ದೀಪಾ ಕೋಟ್ಯಾನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ದಿಶು ಕುಂದರ್ ಸ್ವಾಗತಿಸಿ , ವ್ಯಕ್ತಿ ಪರಿಚಯವನ್ನು ವಿಘ್ನೇಶ್ ಪೈ,ಧನ್ಯವಾದವನ್ನು ಚಿನ್ಮಯ ಹಾಗು ನಿರೂಪಣೆಯನ್ನು ತುಷಾರ್ ಇವರು ನೆರವೇರಿಸಿದರು.
No comments:
Post a Comment